Harshika Poonacha Instagram – @bhuvanamfoundation supports the #Touristguides of our Karnataka’s Historical Heritage #Badami .
As there is no tourism since 2 years,These tourist guides have been suffering and @bhuvanamfoundation will always be at their rescue 🙏
ಭುವನಂ ತಂಡದ ಉತ್ತರ ಕರ್ನಾಟಕದ ಉಷಾರ್ ಕೊರೊನ ಜಾಗೃತಿ ಜಾತ್ರೆ ಇವತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ತಲುಪಿದೆ. ಬಾದಾಮಿಯ , ಐಹೊಳೆ ,ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳಾಗಿರುವುದರಿಂದ ಅಲ್ಲಿಯ ಪ್ರವಾಸಿ ಮಾರ್ಗದರ್ಶಿಗಳು 2 ವರ್ಷದಿಂದ ಕೆಲಸವಿಲ್ಲದೆ ತುಂಬಾನೆ ಕಷ್ಟದಲ್ಲಿದ್ದರು. ಇದನ್ನು ಅರಿತ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚರವರು ಕೂಡಲೇ ಅಲ್ಲಿಗೆ ದಾವಿಸಿ ಅಲ್ಲಿಯ ಪ್ರವಾಸಿ ಮಾರ್ಗದರ್ಶಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳನ್ನು ಹಾಗೂ ಔಷದಿ ಮತ್ತು ಬೇರೆ ಸೌಕರ್ಯಗಳನ್ನು ಒದಗಿಸಿದ್ದಾರೆ. ಹಾಗೆ ಗುಳೀದಗುಡ್ಡ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿಯ ರೋಗಿಗಳೊಡನೆ ಮಾತಾಡಿ ಅವರೊಡನೆ ಕಾಲ ಕಳೆದು ಅವರಿಗೆ ಹುರಿದುಂಬಿಸುವ ಕೆಲಸವನ್ನು ಮಾಡಿದರು.
ಸಮಾಜದಲ್ಲಿ ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವ ಮತ್ತು ಮಾನಸಿಕವಾಗಿ ತಗ್ಗಿರುವ ವರ್ಗದವರ ಬಗ್ಗೆ ಸಂಶೋಧನೆ ಮಾಡಿ, ತಿಳಿದುಕೊಂಡು ಅವರ ಮನೆ ಬಾಗಿಲಿಗೆ ಹೋಗಿ ಸಹಾಯ ಮಾಡುತ್ತಿರುವ ಭುವನಂ ಸಂಸ್ಥೆಯ ಕಾರ್ಯವನ್ನು ಸ್ಥಳೀಯರು ಮೆಚ್ಚಿ ಕೊಂಡಾಡಿದರು. ಇವತ್ತಿಗೆ ಈ ಸಂಸ್ಥೆಯು ಕರ್ನಾಟಕದ ಆದ್ಯಂತ 15708 ಸಂಸಾರಗಳಿಗೆ ನೆರವಾಗುತ್ತದೆ. | Posted on 14/Jun/2021 10:08:46